Wednesday 13 July 2016

"ನಾನು ಸಂಚಾರ ನಿಯಮ ಪಾಲನಾ ದಳಪತಿಯಾದಾಗ"


"ದೇಶ ನಮಗೆ ಏನು ಕೊಟ್ಟಿತು ಅನ್ನುವುದಕ್ಕಿಂತ ದೇಶಕ್ಕೆ ನಾನು ಏನು ಕೊಟ್ಟೆ" ಎಂಬ ಪ್ರಶ್ನೆ ನನ್ನ ಕಾಡುತ್ತಿತ್ತು.
                         ನನ್ನ  ದೇಶಕ್ಕೆ ಸೇವೆ ಮಾಡಲು ಯಾವ ದಾರಿಯು ಕಾಣುತ್ತಿಲವಲ್ಲ ಎಂದು ಯೋಚಿತ್ತಿದ್ದ ನನಗೆ ಅದೃಷ್ಟವೋ ಏನೋ ನನ್ನ ಅಧ್ಯಾಪಕರು ಬಂದು “Traffic warden squad ” ಆಗಿ ಮಂಗಳೂರು ಸಂಚಾರಿ ಪೋಲಿಸ್ ಇಲಾಖೆಗೆ ಹಾಗೂ ಸಾರ್ವಜನಕರಿಗೆ ಸಹಾಯ ಮಾಡಲು ಯಾರಿಗೆಲ್ಲ ಆಸಕ್ತಿ ಇದೆ, ಅವರು ಬಂದು ನನ್ನನ್ನು ಬೇಟಿ ಮಾಡಿ" ಎಂದರು. ತರಗತಿ ಮುಗಿದ ಮೇಲೆ ಅಧ್ಯಾಪಕರನ್ನು ಬೇಟಿ ಮಾಡಿ ನನ್ನ ಆಸಕ್ತಿಯನ್ನು ತಿಳಿಸಿದೆ. ಮರುದಿನ ಮಂಗಳೂರು ಕಮಿಶನರ್ ಕಛೇರಿಯಲ್ಲಿ ಸಭೆ ಇರುವ ವಿಷಯವನ್ನು ತಿಳಿಸಿದರು.
                        ಮಾರನೇ ದಿನ ಸುಮಾರು ೧೦ ಗಂಟೆಗೆ ನಾನು ಮತ್ತು ನನ್ನ ಕಾಲೇಜಿನ ವಿದ್ಯಾರ್ಥಿನಿಯರು ಕಮಿಶನರ್ ಕಛೇರಿಗೆ ತೆರಳಿದೆವು. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಲ್ಲದೆ ಮಂಗಳೂರಿನ ಇತರ ಕಾಲೇಜಿನ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಅಲ್ಲಿದರು. ಕಮಿಶನರ್ ಶ್ರೀ. ಉದಯ್ ಕುಮಾರ್ ರವರು “Traffic warden squad ” ಆಗಿ ನಾವು ಎನು ಮಾಡಬೇಕು ಎಂದು ಹೇಳಿದರು. ನಮ್ಮ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿಯರ ಗುಂಪಿಗೆ ಶ್ರೀ. ರೋಶನ್ ರವನ್ನು warden ಆಗಿ ನೇಮಿಸಿದರು.
                        ನಮಗೆ ಒಂದು ವಾರ “TWS” ನ ತರಬೇತು ನೀಡಿದರು. ಈ ತರಬೇತಿಯಲ್ಲಿ ರಸ್ತೆಯ ನಿಯಮಗಳು, ಪಥಸಂಚಲನ ಮತ್ತು ರಸ್ತೆಯಲ್ಲಿ ಕೆಲಸಮಾಡುವಾಗ ಎಷ್ಟು ಎಚ್ಚರ ವಹಿಸಬೇಕು ಎಂಬುದನ್ನು ಹೇಳಿದರು. ತರಬೇತಿಯ ಕೊನೆಯ ದಿನದಂದು “TWS” ಸಮವಸ್ತ್ರವನ್ನು ನೀಡಿದರು.
                         ಅಕ್ಟೋಬರ್ ೨, ಗಾಂಧೀ ಜಯಂತಿ ದಿನದಂದು ಮಂಗಳೂರಿನಲ್ಲಿ “TWS” ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿದರು. ಮಿಲಾಗ್ರಿಸ್ ನಿಂದ ಕಮಿಶನರ್ ಕಛೇರಿಯವರೆಗೆ  ನಾವೆಲ್ಲರೂ ಸಮವಸ್ತ್ರವನ್ನು ಧರಿಸಿ ಪಥಸಂಚಲನ ಮಾಡಿದ್ದೆವು. ಉದ್ಘಾಟನಾ ಕಾರ್ಯಕ್ರಮ ಮುಗಿದ ತಕ್ಷಣ ಮನೆಗೆ ಹೋಗಿ ಪರೀಕ್ಷೆಗೆ ತಯಾರಿ ಮಾಡಲು ಆರಂಭಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ ಪರೀಕ್ಷೆ ಇದ್ದ ಕಾರಣ “TWS” ಆಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಪರೀಕ್ಷೆ ಮುಗಿದ ಮರು ದಿನವೇ ಕೆಲಸ ಮಾಡಲು ರಸ್ತೆ ಬದಿಯಲ್ಲಿ ನಿಂತುಕೊಂಡೆ. ಮೊದಲು ಸ್ವಲ್ಪ ಭಯ ಅನಿಸಿದರೂ, ಸಾರ್ವಜನಿಕರಿಂದ ಒಳ್ಳೆ ಪ್ರತಿಕ್ರಿಯೆ ದೊರಕಿತು, ಅಂದು ಸಂತೋಷವೂ ಜೊತೆಯಾಯಿತು. ನಮ್ಮ ಸೇವೆಯನ್ನು ನೋಡಿ ಹಲವರು ಧನ್ಯವಾದ ಹೇಳುತ್ತಿದ್ದರು. ಅದರೇ ಕೆಲವರ ನಿರ್ಲಕ್ಷ ಬೇಸರ ತರುತ್ತಿತ್ತು.
                         ಅವಕಾಶ ಬಂದಾಗ ಬೇಡವೆಂದು ಕೈಚ್ಚೆಲ್ಲಿ ಸುಮ್ಮನಿದ್ದರೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿರುತ್ತಿತ್ತು. “Traffic warden squad ” ಆಗಿ ನಾನು ಸಾರ್ವಜನಿಕರಿಗೆ ಮಾಡಿದ ಸಹಾಯವು ಒಂದು ಸಣ್ಣ ಮಟ್ಟದ ಅವಕಾಶ ಎಂದು ತಿಳಿದು ಹೆಚ್ಚಿನ ಅವಕಾಶಗಳ ಬೆನ್ನಟ್ಟಿ ಮುಂದಕ್ಕೆ ಸಾಗುತ್ತಿದ್ದೇನೆ.

Tuesday 28 June 2016

"ವಿಕಿಪೀಡಿಯಕ್ಕೆ ನನ್ನ ಪ್ರವೇಶ"


ಆಗಷ್ಟೇ ನಾನು ಮೂರನೇ ಸೆಮಿಸ್ಟರ್ ರಜೆಯನ್ನು ಮುಗಿಸಿ ಕಾಲೇಜಿಗೆ ಬಂದಿದ್ದೆ. ಮೊದಲದಿನದ ಕನ್ನಡ ತರಗತಿಯಲ್ಲಿ ನಮ್ಮ ಸರ್ ಬಂದು "ಡಿಸೆಂಬರ್ ೧೦,೧೧,೧೨ ವಿಕಿಪೀಡಿಯ ಕಾರ್ಯಗಾರ ಇದೆ ಆಸಕ್ತಿ ಇರುವವರು ನಿಮ್ಮ ಹೆಸರನ್ನು ಕನ್ನಡ ಕಾರ್ಯದರ್ಶಿಯಲ್ಲಿ ನೋಂದಾಯಿಸಿ" ಎಂದರು . ಇದನ್ನು ಕೇಳಿದ ತಕ್ಷಣ ನನಗೆ ಖುಷಿಯಾಯಿತು. ನನ್ನ ಗೆಳತಿಯೊಬ್ಬಳು ರಜೆಯಲ್ಲಿ ಏನು ಮಾಡುತ್ತಿದ್ದಿಯಾ ಎಂದು ಕೇಳಿದಾಗಲೆಲ್ಲಾ ವಿಕಿಪೀಡಿಯದಲ್ಲಿ ಲೇಖನ ಬರೆಯುವುದು ಎಂದು ಹೇಳುತ್ತಿದ್ದಳು. ನನ್ನ ಗೆಳತಿಯರಿಗೆ ಕಾರ್ಯಗಾರಕ್ಕೆ ಬರುವ ಮನಸ್ಸು ಇಲ್ಲದಿದ್ದರು ನನಗೋಸ್ಕರ ಒಲ್ಲದ ಮನಸ್ಸಿನಿಂದ ನೋಂದಾಯಿಸಿಕೊಂಡರು.

ಅಂತು-ಇಂತು ನಾನು ಕಾಯುತ್ತಿದ್ದ ದಿನ ಡಿಸೆಂಬರ್ ೧೦ನೇ ತಾರೀಕು ಬಂತು. ಆ ದಿನ ಏನೋ ಮನಸ್ಸಿನಲ್ಲಿ ಭಯ, ಆತಂಕ, ಎಲ್ಲವನ್ನು ಒಮ್ಮೆಲೇ ತಿಳಿದು ಕೊಳ್ಳುವ ಆತುರ ಹಾಗೂ ಒಂದು ಕಡೆಯಲ್ಲಿ ಖುಷಿ. ಕಾರ್ಯಗಾರದಲ್ಲಿ ಭಾಗವಹಿಸುವವರನ್ನು ಬೆಳ್ಳಿಗೆ ೯ ಗಂಟೆಗೆ ಬರುವಂತೆ ಹೇಳಿದರು. ನಾನು ಮತ್ತು ನನ್ನ ಗೆಳತಿಯರು ೮.೫೫ ಕ್ಕೆ ಹೋಗಿ ಕಾರ್ಯಗಾರ ನಡೆಯುವ ಜಾಗದಲ್ಲಿ ಕುಳಿತುಕೊಂಡೆವು. ೯.೩೦ ಗೆ ಉದ್ಗಾಟನೆ ಕಾರ್ಯಕ್ರಮ ಆರಂಭವಾಯಿತು. ಡಾ|| ಪವನಜ ರವರು ವಿಕಿಪೀಡಿಯ ಎಂದರೆ ಏನು ಎಂಬುದನ್ನು ಹೇಳಿದರು. ನನಗೆ ಈಗಲೂ ನೆನಪಿರುವ ಸಾಲು ಎಂದರೆ "ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ".

ಉದ್ಗಾಟನ ಕಾರ್ಯಕ್ರಮ ಮುಗಿದ ನಂತರ ಭಾಗವಹಿಸುವವರ ಸಂಖ್ಯೆ ತುಂಬಾ ಇದುದ್ದರಿಂದ ನಮ್ಮನ್ನು ಎರಡು ಗುಂಪುಗಳಾಗಿ ಮಾಡಿದ್ದರು. sandbox ನಲ್ಲಿ ನಮ್ಮ ಬಗ್ಗೆ ಬರೆಯಲು ಹೇಳಿದರು. ನನಗೆ ಕನ್ನಡ ಟೈಪಿಂಗ್ ಕಷ್ಟವೆನಿಸಲಿಲ್ಲ.
ಕಾರ್ಯಗಾರದ ಎರಡನೇ ದಿನ ನಮಗೆ ಕರಾವಳಿ ಲೇಖಕಿಯರ ಬಗ್ಗೆ ಲೇಖನ ಮಾಡುವಂತೆ ಹೇಳಲಾಗಿತ್ತು. ಉತ್ತಮ ಲೇಖನವನ್ನು ಹೇಗೆ ಬರೆಯುವುದು ಎಂಬುದನ್ನು ಹೇಳಿಕೊಟ್ಟರು. ನಮಗೆ ನೀಡಿದ ಸೂಚನೆಯಂತೆ ನಾನು ಯು. ಮಹೇಶ್ವರಿ ಅವರ ಬಗ್ಗೆ ಲೇಖನ ಬರೆದೆ. ಲೇಖನ ಬರೆದು ಅದನ್ನು ವಿಕಿಪೀಡಿಯಕ್ಕೆ ಸೇರಿಸುವಾಗ ಸಂತೋಷವಾಯಿತು.

ಕಾರ್ಯಗಾರದ ಕೊನೆಯ ದಿನ ಡಿಸೆಂಬರ್ ೧೨ ಬಂತು . ಕೊನೆಯ ದಿನವು ನಾವು ಲೇಖನ ಬರೆಯುವುದನ್ನು ಮುಂದುವರೆಸಿದ್ದೆವು. ಕೊನೆಯ ದಿನ ಸಂತ ಆಲೋಶಿಯಸ್ ಕಾಲೇಜು, ಮಂಗಳೂರು ಇಲ್ಲಿನ ಪದವಿ ವಿದ್ಯಾರ್ಥಿಗಳು ನಮಗೆ ಸಹಾಯ ಮಾಡಲು ಬಂದಿದ್ದರು.ಕಾರ್ಯಗಾರದ ಕೊನೆಯ ಹಂತದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಕೊಟ್ಟರು. ಕಾರ್ಯಗಾರ ಮುಗಿಸಿ ಮನೆಗೆ ಹೋಗುವಾಗ ಮನಸ್ಸಿನಲ್ಲಿ ದು:ಖ ತುಂಬಿತ್ತು.

ಮೂರು ದಿನದ ವಿಕಿಪೀಡಿಯ ಕಾರ್ಯಗಾರದಲ್ಲಿ ಒಟ್ಟು ೨೦ ವಿದ್ಯಾರ್ಥಿಗಳು, ೨ ಉಪಾನ್ಯಸಕರು ಮತ್ತು ೨ ಗ್ರಂಥಾಪಾಲಕಿಯರು ಭಾಗವಹಿಸಿದರು. ನಾವೆಲ್ಲರೂ ಸೇರಿ ಸುಮಾರು ೫೦ ಲೇಖನಗಳನ್ನು ವಿಕಿಪೀಡಿಯಕ್ಕೆ ಸೇರಿಸಿದ್ದೆವು.ವಿಕಿಪೀಡಿಯದಲ್ಲಿ ಲೇಖನ ಹಾಕುವಾಗ ನನಗೆ ಖುಷಿ ಹಾಗು ತೄಪ್ತಿ ಸಿಗುತ್ತದೆ ಏಕೆಂದರೆ ನಾನು ಹಾಕಿದ ಲೇಖನದಿಂದ ಬೇರೆಯವರಿಗೆ ಉಪಯೋಗವಾಗುತ್ತದೆ ಮಾತ್ರವಲ್ಲದೆ ನನಗೆ ವಿಷಯಗಳ ವಿಸ್ತಾರವಾದ ಜ್ಞಾನವೂ ಸಿಗುತ್ತದೆ.

ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುವ ಅಭ್ಯಾಸ ನನಗೆ ಇರಲಿಲ್ಲ ಆದರೆ ಮೂರು ದಿನದ ವಿಕಿಪೀಡಿಯ ಕಾರ್ಯಗಾರದಲ್ಲಿ ಭಾಗವಹಿಸಿದ ನಂತರ ದಿನಲೂ ತರಗತಿ ಮುಗಿದ ಮೇಲೆ ಗ್ರಂಥಾಲಯಕ್ಕೆ ಹೋಗಿ ಹಲವಾರು ಪುಸ್ತಕಗಳನ್ನು ಓದುವುದನ್ನು ರೂಢಿಮಾಡಿಕೊಂಡೆ. ನನಗೆ ಗೊತ್ತಿಲ್ಲದ್ದ ಹಾಗೆ ಹಲವಾರು ವಿಷಯಗಳ ಬಗ್ಗೆ ಸಂಶೋಧನೆ ಮಾಡುವುದನ್ನು ಕಲಿತುಕೊಂಡೆ. ವಿಷಯಗಳನ್ನು ತಿಳಿದು ಕೊಳ್ಳುವ ಕುತೂಹಲವೂ ಹೆಚ್ಚಾಯಿತು.


ಬಹುಶ ನನ್ನ ಕಾಲೇಜು ಆದ ಸಂತ ಆಗ್ನೇಸ್ (ಸ್ವಾಯತ್ತ) ಪದವಿ ಕಾಲೇಜು, ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ|| ಸಂಪೂರ್ಣನಂದ ಮತ್ತು ಉಪಾನ್ಯಸಕಿ  ಡಾ|| ಶೈಲಾಜಾ ಕೆ. ವಿಕಿಪೀಡಿಯ ಕಾರ್ಯಗಾರದ ಬಗ್ಗೆ ಚಿಂತಿಸದ್ದೆ ಇದ್ದರೆ, ನನ್ನ ಸಮಾಜಕ್ಕೆ ವಿಕಿಪೀಡಿಯ ದಿಂದ ಚಿಕ್ಕ ಸೇವಯನ್ನು ಮಾಡಲು ಆಗುತ್ತಿರಲಿಲ್ಲ. ನನ್ನ ಕಾಲೇಜು ಮತ್ತು ಕನ್ನಡ ವಿಭಾಗಕ್ಕೆ ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ.


ನಾವು ತಪ್ಪು ಮಾಡಿದಾಗ ನಮ್ಮ ಮೇಲೆ ಕೋಪ ಮಾಡಿಕೊಳ್ಳದೆ ನಮ್ಮನ್ನು ತಿದ್ದಿ ಮತ್ತು ಒಳ್ಳೆಯ  ಲೇಖನವನ್ನು ಬರೆಯಲು ಹೇಳಿಕೊಟ್ಟ ಡಾ|| ಪವನಜ, ಡಾ|| ವಿಶ್ವನಾಥ್ ಬದಿಕಾನ ಹಾಗೂ ಅನಂತ್ ಸುಬ್ರಾಯ್ ರವರಿಗೆ ನಾನು ಅಬಾರಿಯಾಗಿರುತ್ತೇನೆ. ದಿನದಿಂದ ದಿನಕ್ಕೆ ವಿಕಿಪೀಡಿಯದಲ್ಲಿ ಹೊಸ ವಿಷಯಗಳನ್ನು ಕಲಿಯುತ್ತ ಸಾಗುತ್ತಿದ್ದೇನೆ.